Discoverದನಿಪಯಣದನಿಪಯಣ: ಹರಿಹರ-ಗವಿಗಂಗಾಧರೇಶ್ವರ
ದನಿಪಯಣ: ಹರಿಹರ-ಗವಿಗಂಗಾಧರೇಶ್ವರ

ದನಿಪಯಣ: ಹರಿಹರ-ಗವಿಗಂಗಾಧರೇಶ್ವರ

Update: 2020-01-26
Share

Description

"ಯಾತಕವ್ವಾ ಹುಬ್ಬಳ್ಳಿ ಧಾರವಾಡ,
ನಮ್ಮ ಬೆಂಗಳೂರು ಊರ ನಮಗ ಪಾಡ!

ಹರಿಹರೇಶ್ವರನ ಗುಡ್ಡ ಬಲು ಚಂದ,
ಅದರ ಉದ್ಯಾನ ಕಣ್ಣಿಗೆ ಅಂದ,
ಗವಿಯಲಿರುವ ಗಂಗಾಧರನ ನೋಡ,
ಅವನ ಚರಣಕ ನೀ ಸಣಮಾಡ !!"

ಎಂದು ಹಾಡುತ್ತಾ ಈ ಸಲ ದನಿಪಯಣದಲ್ಲಿ ನಾವು ಬೆಂಗಳೂರಿನ ಗವಿಪುರದ ಗವಿಗಂಗಾಧರೇಶ್ವರನ ದೇವಸ್ಥಾನಕ್ಕೆ ಪಯಣ ಬೆಳೆಸಿದ್ದೇವೆ.

👉 ಪ್ರತಿ ಸಂಕ್ರಾಮಣದ ಸಂಜೆ ಸೂರ್ಯ ಕಿರಣ ನೇರವಾಗಿ ಗಂಗಾಧರನ ಮೇಲೆ ಬಿದ್ದು ಬೆಳಕಿನ ಅಭಿಷೇಕ ಮಾಡುತ್ತವೆ. ಇದು "ಸೂರ್ಯ ಮಜ್ಜನ" ಎಂದೇ ಪ್ರಸಿದ್ಧ.

👉 ಬಹಳ ಜನರಿಗೆ ಗೊತ್ತಿಲ್ಲ, ಜನೇವರಿ ೧೪/೧೫ ಅಷ್ಟೇ ಅಲ್ಲ ನವಂಬರ್ ೩೦ರಂದು ಕೂಡ ಸೂರ್ಯ ಕಿರಣಗಳು ಗಂಗಾಧರನ ಮೇಲೆ ನೇರವಾಗಿ ಬೀಳುತ್ತವೆ.

👉 ಇಲ್ಲಿರುವ ಬೃಹದಾಕಾರದ ತ್ರಿಶೂಲ, ಡಮರು, ಸೂರ್ಯಪಾನ , ಚಂದ್ರಪಾನಗಳು ಬಹು ಕಾಲದಿಂದ ಜನರನ್ನು ಆಕರ್ಷಿಸಿವೆ. ಹಲವಾರು ಐತಿಹಾಸಿಕ ಚಿತ್ರಗಳಲ್ಲಿ ಕಾಣಿಸಿಕೊಂಡಿವೆ.

👉 ಸೂರ್ಯ-ಚಂದ್ರ ಪಾನಗಳನ್ನು ಹಿಂದಿನವರು ಉತ್ತರಾಯಣ, ದಕ್ಷಿಣಾಯಣ ಗುರುತಿಸಲು ಉಪಯೋಗಿಸುತ್ತಿದ್ದರು.

👉 ಹೆಚ್ಚಿನ ಮಾಹಿತಿ ತಿಳಿಸಲು ಖ್ಯಾತ ಖಭೌತ ವಿಜ್ಞಾನಿ, ಡಾ. ಬಿ.ಎಸ್. ಶೈಲಜಾ ಅವರು ಇರುತ್ತಾರೆ. ಅವರು ಬೆಂಗಳೂರಿನ ನೆಹರು ತಾರಾಲಯದ ನಿವೃತ್ತ ನಿರ್ದೇಶಕರು, ಸಧ್ಯ ಅಲ್ಲಿನ ಸಂದರ್ಶಕ ಪ್ರಾಧ್ಯಾಪಕರು.


ಈ ಎಲ್ಲಾ ವಿಷಯಗಳನ್ನು ನಮ್ಮ #ದನಿಪಯಣ ದ ಈ ಸಂಚಿಕೆಯಲ್ಲಿ ಕೇಳಿ.

ಈ ಸಂಚಿಕೆಗೆ ಸಂಬಂಧಿಸಿದ ಚಿತ್ರಗಳು ಈ ಬ್ಲಾಗಿನಲ್ಲಿವೆ : http://antarangada-mrudanga.blogspot.com/2020/01/blog-post.html
Comments 
loading
In Channel
loading
00:00
00:00
1.0x

0.5x

0.8x

1.0x

1.25x

1.5x

2.0x

3.0x

Sleep Timer

Off

End of Episode

5 Minutes

10 Minutes

15 Minutes

30 Minutes

45 Minutes

60 Minutes

120 Minutes

ದನಿಪಯಣ: ಹರಿಹರ-ಗವಿಗಂಗಾಧರೇಶ್ವರ

ದನಿಪಯಣ: ಹರಿಹರ-ಗವಿಗಂಗಾಧರೇಶ್ವರ

Gururaj Kulkarni