Discoverದನಿಪಯಣದನಿಪಯಣ-ಪ್ಲೇಗಮ್ಮನ ಪುರಾಣ
ದನಿಪಯಣ-ಪ್ಲೇಗಮ್ಮನ ಪುರಾಣ

ದನಿಪಯಣ-ಪ್ಲೇಗಮ್ಮನ ಪುರಾಣ

Update: 2020-05-09
Share

Description

ಈಗ ಕರೋನಾ ಹೆಮ್ಮಾರಿಯ ಆರ್ಭಟದ ನಡುವೆ ಒಂದೂ ಕಾಲು ಶತಮಾನದ ಹಿಂದೆ ಪ್ಲೇಗಮ್ಮ ಕರ್ನಾಟಕದಲ್ಲಿ ನಡೆಸಿದ ಮಾರಣಹೋಮದ ದುಃಸ್ವಪ್ನವನ್ನು ನೆನೆಸಿಕೊಂಡು, ಅದರಿಂದ ನಾವೇನು ಕಲಿಯಬಹುದು ಎಂದು #ದನಿಪಯಣ ಈ ಸಂಚಿಕೆಯಲ್ಲಿ ನೋಡೋಣ ಬನ್ನಿ.

👉 ಇಂದಿನ ಕೊರಣ್ಣನದೂ ಅಂದಿನ ಪ್ಲೇಗಮ್ಮನದು ಒಂದೇ ತವರು - ಚೀನಾ 🇨🇳 !

👉 ಮುಂಬೈಗೆ ಮೊದಲು ಬಂದಿದ್ದ ಸೋಂಕು, ಕಾಗವಾಡದಲ್ಲಿ ಕರ್ನಾಟಕದ ಮೊದಲ ಬಲಿ ಪಡೆದಿತ್ತು. ನಂತರ ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ಮರಣಮೃದಂಗ ಬಾರಿಸಿತ್ತು.

👉 ಆ ಪ್ಲೇಗಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಸುಮಾರು ೪೦ಸಾವಿರ ಸಾವುಗಳಾದರೆ, ಬೆಂಗಳೂರಿನಲ್ಲಿ ಸತ್ತವರು-ಊರು ಬಿಟ್ಟವರಿಂದಾಗಿ ಜನಸಂಖ್ಯೆ ಹೆಚ್ಚೂಕಡಿಮೆ ಅರ್ಧದಷ್ಟಾಗಿತ್ತು.

👉 ಈಗ ಕೊರೋನಾ-ನಿಯಂತ್ರಣಕ್ಕೆ ಕೆಲ ಜನ ವಿರೋಧಿಸುರುವಂತೆ, ಆವಾಗ ಪ್ಲೇಗು-ನಿಯಂತ್ರಣಕ್ಕೂ ಕೆಲ ಜನ ವಿರೋಧಿಸಿದ್ದರು. ಗಂಜಾಂನಲ್ಲಿ ದಂಗೆಯೇ ಆಗಿ, ಪೋಲೀಸ್ ಕಾರ್ಯಾಚರಣೆಯಲ್ಲಿ ಹಲವರ ಜೀವಹಾನಿಯಾಗಿತ್ತು.

👉 ಬೆಂಗಳೂರಿನ ಬಸವನಗುಡಿ-ಮಲ್ಲೇಶ್ವರ, ಧಾರವಾಡದ ಮಾಳಮಡ್ಡಿ ಮೂರೂ ಸಮವಯಸ್ಕ ಬಡಾವಣೆಗಳು. ಮೂರರ ಅಭಿವೃದ್ಧಿಯೂ ಪ್ಲೇಗಿನ ನಂತರ ಸರ್ಕಾರಗಳಿಂದ ಗಾಳಿ-ಬೆಳಕು ಚನ್ನಾಗಿರುವ ವಸತಿ ಬಡಾವಣೆ ನಿರ್ಮಾಣ ಮಾಡುವ ಉದ್ದೇಶದಿಂದ ಆಗಿತ್ತು.

👉 ನಿಮಗೆ ಗೊತ್ತಾ ? ಬೆಂಗಳೂರಿನ ಹೋಟಲುದ್ಯಮದ ಅರುಣೋದಯ, ಟೆಲಿಫೋನ್ ಜಾಲ ವಿಸ್ತರಣೆಗೆ ಪ್ಲೇಗೇ ಕಾರಣವಾಗಿತ್ತು !

ಈ ಎಲ್ಲಾ ವಿಷಯಗಳನ್ನು ನಮ್ಮ #ದನಿಪಯಣ ದ ಈ ಸಂಚಿಕೆಯಲ್ಲಿ ಕೇಳಿ.


ನಿಮಗೆ ಗೊತ್ತಿರೊ ಹಾಗೆ : *ದನಿಪಯಣ* ಪಾಡ್‌ಕಾಸ್ಟ್‌ ಕಾರ್ಯಕ್ರಮದ ಉದ್ದೇಶ ಶಾಲೆಯಲ್ಲಿ ಕಲಿಸದ, ಪಠ್ಯ ಪುಸ್ತಕಗಳಲ್ಲಿ ಇರದ ನಮ್ಮ ಊರು-ನಾಡುಗಳ ಕತೆ-ಇತಿಹಾಸ ತಿಳಿದುಕೊಳ್ಳೋದು ಮತ್ತು ಮಕ್ಕಳಿಗೆ ತಿಳಿಸುವುದು.
ಈ ಪಾಡ್‌ಕಾಸ್ಟ್‌ ಸಂಚಿಕೆಗಳು ರೇಡಿಯೋ-ಗಿರ್ಮಿಟ್ನಲ್ಲಿ (radiogirmit.com) ವಾರ-ಬಿಟ್ಟು-ವಾರ ಗುರುವಾರ ಪ್ರಸಾರ ಆಗುತ್ತವೆ.

ದನಿಪಯಣ ದ ಹಿಂದಿನ ಸಂಚಿಕೆಗಳು ಗೂಗಲ್‌ಪಾಡ್‌ಕಾಸ್ಟ್ ನಲ್ಲಿ ಲಭ್ಯವಿವೆ: https://www.google.com/podcasts?feed=aHR0cHM6Ly9hbmNob3IuZm0vcy8xMTAwMTAyMC9wb2RjYXN0L3Jzcw==

ನಮ್ಮ ದನಿಪಯಣದ ಸಂಚಿಕೆಗಳನ್ನು ಇತರ ಆಸಕ್ತರಿಗೆ ಫಾರ್ವರ್ಡ್ ಮಾಡಿ.

ನಿಮಗೆ ಕೇಳಲು ಆಸಕ್ತಿ ಇಲ್ಲವಾದರೆ, ದಯವಿಟ್ಟು ತಿಳಿಸಿ. ಮುಂದಿನ ಸಂಚಿಕೆಯಿಂದ ತೊಂದರೆ ಕೊಡೋದಿಲ್ಲ🙏

ಅನಿಮಿಷ ಮತ್ತು ಗುರುರಾಜ ಕುಲಕರ್ಣಿ


.
Comments 
In Channel
loading
00:00
00:00
x

0.5x

0.8x

1.0x

1.25x

1.5x

2.0x

3.0x

Sleep Timer

Off

End of Episode

5 Minutes

10 Minutes

15 Minutes

30 Minutes

45 Minutes

60 Minutes

120 Minutes

ದನಿಪಯಣ-ಪ್ಲೇಗಮ್ಮನ ಪುರಾಣ

ದನಿಪಯಣ-ಪ್ಲೇಗಮ್ಮನ ಪುರಾಣ

Gururaj Kulkarni